- Advertisement -
- Advertisement -
ಬೆಳ್ತಂಗಡಿ : ಮನೆಗೆ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬಂದ ತಂಡ ಕಿಡ್ನ್ಯಾಪ್ ಮಾಡಿಕೊಂಡು ಅಳದಂಗಡಿ ಕೆದ್ದು ಶಾಲೆಗೆ ಕರೆದೊಯ್ಯುದ್ದು ಹಲ್ಲೆ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ಬೈಲಿನ ನಿತೇಶ್(24) ಎಂಬಾತನನ್ನು “ಶಿವಮಣೆ” ಎಂಬ ಹೆಸರಿನ ಬೊಲೆರೋ ವಾಹನಲ್ಲಿ ಬಂದ
ದುಷ್ಕರ್ಮಿಗಳು ಎಳೆದೊಯ್ಯುದ್ದು ಅಳದಂಗಡಿಯ ಕೆದ್ದು ಶಾಲೆಯ ಆಟದ ಮೈದಾನದಲ್ಲಿ ಹಲ್ಲೆ ಮಾಡಿದ್ದಾರೆ. ಇನ್ನೂ ಯುವಕನ ಕಡೆಯವರು ಸ್ಥಳಕ್ಕೆ ಹೋಗಿದ್ದು ಎರಡು ತಂಡದ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಘಟನೆ ಬಗ್ಗೆ ವೇಣೂರು ಠಾಣೆಯ ಪಿಎಸ್ಐ ಸೌಮ್ಯ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.
- Advertisement -