- Advertisement -
- Advertisement -
ಬೆಳ್ತಂಗಡಿ: ಗೆಳೆಯನೊಂದಿಗೆ ಹೊಳೆಗೆ ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಪುದುವೆಟ್ಟು ಗ್ರಾಮದ ಶಾಂತಿ ಹೊಳೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಕಂಚೇರಿ ಕಂಡ ನಿವಾಸಿ ಜೈಸನ್ ಪಿ.ವಿ. (34) ತನ್ನ ಅಕ್ಕನ ಮನೆಗೆ ಹೋಗಿದ್ದರು. ಈ ವೇಳೆ ಗೆಳೆಯ ಸ್ಟ್ಯಾನ್ಲಿಯೊಂದಿಗೆ ರವಿವಾರ ಪುದುವೆಟ್ಟು ಗ್ರಾಮದ ಶಾಂತಿಯ ಹೊಳೆಗೆ ಸ್ನಾನಕ್ಕೆಂದು ಬೈಕ್ನಲ್ಲಿ ತೆರಳಿದ್ದಾರೆ. ಸ್ನಾನಕ್ಕೆ ಇಳಿದ ಜೈಸನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಅವರ ಮೃತದೇಹವು ಪತ್ತೆಯಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -