Sunday, May 19, 2024
Homeಕರಾವಳಿಕಡಬ; ಹೆತ್ತವರು, ಸಹೋದರನನ್ನು ಕಳೆದುಕೊಂಡ ನೋವು; ಒಂಟಿತನದಿಂದ ನೊಂದು ಸ್ಟೇಟಸ್ ಹಾಕಿ ಯುವಕ ನೇಣಿಗೆ ಶರಣು

ಕಡಬ; ಹೆತ್ತವರು, ಸಹೋದರನನ್ನು ಕಳೆದುಕೊಂಡ ನೋವು; ಒಂಟಿತನದಿಂದ ನೊಂದು ಸ್ಟೇಟಸ್ ಹಾಕಿ ಯುವಕ ನೇಣಿಗೆ ಶರಣು

spot_img
- Advertisement -
- Advertisement -

ಕಡಬ : ತನ್ನ ಹೆತ್ತವರು ಹಾಗೂ ಸಹೋದರ ಅಗಲಿಕೆಯ ನೋವಿನಿಂದ ಹೊರ ಬರಲಾರದೇ ಯುವಕನೊಬ್ಬ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿಕೊಂಡು  ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಇಚಿಲಂಪಾಡಿಲ್ಲಿ ಕಳೆದ ತಡರಾತ್ರಿ ನಡೆದಿದೆ. ರೆನೀಶ್ (27) ಮೃತ ಯುವಕ.

ಮೃತ ರೆನೀಶ್ ತಂದೆ ತಾಯಿ ಮೊದಲೇ ನಿಧನರಾಗಿದ್ದರು. ರೆನಿಶ್  ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ರೆನಿಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.  ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆಯೂ ಕೂಡ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.

ತಮ್ಮ ಮನೆಯಲ್ಲಿ ಸತತ ಸಾವುಗಳಿಂದ  ಒಬ್ಬಂಟಿಯಾಗಿದ್ದ ರೆನಿಶ್ ಮಾನಸಿಕವಾಗಿಯೂ ನೊಂದಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ರೆನೀಶ್ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಬಳಿಕ ನೇಣಿಗೆ ಶರಣಾಗಿದ್ದಾರೆ.ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ ಸೇರಿದಂತೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಶರೀರವನ್ನು ಉಪ್ಪಿನಂಗಡಿಯ ಶವಾಗಾರಕ್ಕೆ ಸಾಗಿಸಲಾಗಿದೆ.

- Advertisement -
spot_img

Latest News

error: Content is protected !!