- Advertisement -
- Advertisement -
ಉಡುಪಿ: ಇತ್ತೀಚೆಗೆ ಮಂಡ್ಯದಲ್ಲಿ ನಾಟಕ ಪ್ರದರ್ಶನದ ವೇಳೆ ದೇವಿ ಪಾತ್ರಧಾರಿಗೆ ಮೈಮೇಲೆ ದೇವಿಯ ಅವಾಹನೆ ಅದ ಸುದ್ದಿಯನ್ನು ನೀವೆಲ್ಲಾ ಮಹಾ ಎಕ್ಸ್ ಪ್ರೆಸ್ ನಲ್ಲಿ ಓದಿರ್ತೀರಾ. ಅಂತಹದ್ದೇ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
ಹಟ್ಟಿಯಂಗಡಿ ಮೇಳದ ವತಿಯಿಂದ ಕರಾವಳಿಯ ದೈವದ ಮಹಿಮೆಗೆ ಸಂಬಂಧಪಟ್ಟ ಯಕ್ಷಗಾನ ಪ್ರಸಂಗ ನಡೆಯುತ್ತಿತ್ತು. ಈ ವೇಳೆ ಕಲಾವಿದ ಯೋಗೀಶ್ ಪೂಜಾರಿ ಅವರು ದೈವದ ವೇಷ ಧರಿಸಿದ್ರು. ದೀವಟಿಗೆ ಹಿಡಿದುಕೊಂಡು ಅವರು ರಂಗಸ್ಥಳ ಪ್ರವೇಶ ಮಾಡುತ್ತಿದ್ದಂತೆ ದೇವಿಯ ಅವಾಹನೆಯಾಗಿದೆ. ಕೊನೆಗೆ ಅವರ ಜೊತೆಗಿದ್ದ ಸಹಾಯಕ ಹಾಗೋ ಹೀಗೋ ಮಾಡಿ ದೀವಟಿಗೆಯನ್ನು ಅವರ ಕೈಯಿಂದ ತೆಗೆದುಕೊಂಡಿದ್ದಾನೆ. ಇದೀಗ ಈ ವಿಡಿಯೋ ಚರ್ಚೆಗೆ ಕಾರಣವಾಗಿದ್ದು ಎಲ್ಲೆಡೆ ವೈರಲ್ ಆಗಿದೆ.
- Advertisement -