- Advertisement -
- Advertisement -
ಮಣಿಪಾಲ: ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಕೊಡಂಗೆ ಎಂಬಲ್ಲಿ ಸಾಲ ತೀರಿಸಲಾಗದೆ ಅದೇ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .
ಮೃತರನ್ನು ಹೆರ್ಗ ಗ್ರಾಮದ ಕೊಡಂಗೆ ನಿವಾಸಿ ಯಶೋಧರ ಶೆಟ್ಟಿ ಎಂದು ಗುರುತಿಸಲಾಗಿದೆ . ಇವರು ಬ್ಯಾಂಕ್ , ಪೈನಾನ್ಸ್ ಮತ್ತು ಇತರೆ ಕೈ ಸಾಲ ಮಾಡಿಕೊಂಡಿದ್ದರು . ಆದರೆ ಸಾಲ ತೀರಿಸಲು ಅಸಾಧ್ಯವಾಗಿದ್ದು , ಇದೇ ಚಿಂತೆಯಲ್ಲಿದ್ದ ಯಶೋಧರ ಮನೆಯ ಅಡುಗೆಕೋಣೆಯ ಮರದ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
- Advertisement -