- Advertisement -
- Advertisement -
ಮಣಿಪಾಲ 80 ಬಡಗಬೆಟ್ಟು ಗ್ರಾಮದ ಶಾಂತಿನಗರದಲ್ಲಿ
ಸಾಲದ ಚಿಂತೆಯಿಂದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .
33 ವರ್ಷದ ಬಸಮ್ಮ ಸದರಗಟ್ಟಿ ನೇಣಿಗೆ ಶರಣಾದ ಯುವತಿ. ಇವರು ಸುಮಾರು 3 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು , ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಮನೆ ಸಾಲದ ವಿಚಾರದಲ್ಲಿ ಗಂಡನ ಬಳಿ ಆಗಾಗ ಜಗಳ ಆಗುತ್ತಿತ್ತು.
ಮನೆಯಲ್ಲಿ ಕೋಣೆಯಲ್ಲಿನ ಫ್ಯಾನ್ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ .
- Advertisement -