- Advertisement -
- Advertisement -
ಶಂಕರನಾರಾಯಣ: ದೇವಿ ಪ್ರಸಾದ್ ಶೆಟ್ಟಿ ಎಂಬವವರು,
ಹೊಸಂಗಡಿಯ ರವಿ ಶೆಟ್ಟಿ ಎಂಬವರ ಮೇಲೆ ವಾಹನ ಹರಿಸಿ ಕೊಲೆಗೆ ಯತ್ನಿಸಿರುವುದಾಗಿ ದೇವಿ ಪ್ರಸಾದ್ ಶೆಟ್ಟಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ .
ರವಿ ಶೆಟ್ಟಿ ಅವರು ತಮ್ಮ ಬೈಕ್’ನಲ್ಲಿ ಸಿದ್ದಾಪುರ ಗ್ರಾಮದ ನೀರಾವರಿ ಕಛೇರಿ ಎದುರುಗಡೆ ಹೋಗುತ್ತಿದ್ದಾಗ ಆರೋಪಿ ದೇವಿ ಪ್ರಸಾದ್ ಶೆಟ್ಟಿ ಕಾರಿನಲ್ಲಿ ಹಿಂದೆ ಬಂದು ಕೊಲ್ಲುವ ಉದ್ದೇಶದಿಂದ ಕಾರನ್ನು ಮೇಲೆ ಹತ್ತಿಸಲು ಮುಂದಾಗಿದ್ದಾನೆ .
ಆ ಬಳಿಕ ಸಣ್ಣ ಹೊಳೆ ಎಂಬಲ್ಲಿ ಕೂಡ ಇದೇ ರೀತಿ ಕಾರನ್ನು ಹತ್ತಿಸಲು ಪ್ರಯತ್ನಿಸಿದ್ದು , ಮತ್ತಿಬೇರು ಎಂಬಲ್ಲಿ ರವಿ ಅವರ ವಾಹನ ತಡೆದಾಗ ರವಿ ಶೆಟ್ಟಿ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ .
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -