ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಕಾರಣರಾದವರನ್ನು ಶೀಘ್ರ ಬಂಧಿಸಿ ಶಿಕ್ಷಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಫೆಬ್ರವರಿ 21 ರಂದು ಹೇಳಿದ್ದಾರೆ.
ಪೂರ್ವ ವೈಷಮ್ಯದಿಂದ ಯುವಕನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಸಮುದಾಯಗಳ ನಡುವಿನ ಘರ್ಷಣೆಯ ಅಪಾಯದ ಹಿನ್ನೆಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ಅನ್ನು ಬಿಗಿಗೊಳಿಸಲಾಗಿದೆ. ಸೋಮವಾರ 1ರಿಂದ 10ನೇ ತರಗತಿಗೆ ರಜೆ ಘೋಷಿಸಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ಹರ್ಷ ಅವರ ಕುಟುಂಬವನ್ನು ಭೇಟಿ ಮಾಡಿ ಸರ್ಕಾರ ಅವರ ಜೊತೆಯಲ್ಲಿ ಎಂದು ಭರವಸೆ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿದರು.
ಕೊಲೆಯಲ್ಲಿ ಭಾಗಿಯಾದವರ ಬಗ್ಗೆಯೂ ಮಾಹಿತಿ ಇದೆ ಎಂದರು. “ಐದು ಜನರು ಭಾಗಿಯಾಗಿದ್ದಾರೆಂದು ನಮಗೆ ತಿಳಿದಿದೆ. ನಾವು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅವಶ್ಯಕ” ಎಂದು ಅವರು ಒತ್ತಿ ಹೇಳಿದರು.
ಕೊಲೆಯ ಹಿಂದಿನ ಕಾರಣ ತನಿಖೆಯ ವೇಳೆ ಹೊರಬರಬೇಕಿದೆ ಎಂದು ಜ್ಞಾನೇಂದ್ರ ಹೇಳಿದ್ದಾರೆ. ಹರ್ಷ ವಿರುದ್ಧ ಒಂದೆರೆಡು ಕೇಸ್ ಗಳಿವೆ ಎನ್ನಲಾಗುತ್ತಿದ್ದು, ಏನನ್ನು ಬೇಕಾದರೂ ತಪ್ಪಿಸಿ ಕಾನೂನಿನ ಕಪಿಮುಷ್ಠಿಯಿಂದ ಪಾರಾಗಬಹುದು ಎಂದು ಭಾವಿಸುವವರನ್ನು ಬಿಡುವುದಿಲ್ಲ,” ಎಂದು ಎಚ್ಚರಿಸಿದರು.