- Advertisement -
- Advertisement -
ಮಡಿಕೇರಿ: ಬ್ಯಾರಿಕೇಡ್ ಕೆಳಗೆ ಸಿಲುಕಿ ಕಾಡಾನೆ ಒದ್ದಾಟ ನಡೆಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ತ್ಯಾಗತ್ತೂರು ಬಳಿ ಘಟನೆ ನಡೆದಿದ್ದು, ಸುರೇಶ್ ಎಂಬವರ ಕಾಫಿ ತೋಟದಿಂದ ಹೊರ ಬರುವ ಸಂದರ್ಭದಲ್ಲಿ ಕಾಡಾನೆ ಬ್ಯಾರಿಕೇಡ್ ಕೆಳಗೆ ಸಿಲುಕಿದೆ.
ಸತತ ಪ್ರಯತ್ನದಿಂದ ಬ್ಯಾರಿಕೇಡ್ ನಿಂದ ಬಿಡಿಸಿಕೊಂಡು ಕಾಡಾನೆ ನಂತರ ಅರಣ್ಯದೊಳಗೆ ತೆರಳಿದೆ.
ಅನೆಯ ಒದ್ದಾಟದ ದೃಶ್ಯ ಸ್ಥಳೀಯರ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದೆ.
- Advertisement -