- Advertisement -
- Advertisement -
ಧರ್ಮಸ್ಥಳ; ಕೊಕ್ಕಡದ ಪ್ರಟ್ರಮೆ ಸಮೀಪದ ಸೇತುವೆ ಬಳಿ ಗಂಡು ಕಾಡಾನೆಯೊಂದು ಇಂದು ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಸೇತುವೆ ಬಳಿ ಇದ್ದ ಕಾಡಾನೆ ಜನರನ್ನು ಕಂಡು ತಕ್ಷಣ ಮಸೀದಿ ಬಳಿಯಿಂದ ಪಂಚವಟಿ ಶ್ಯಾಮ್ ಪ್ರಸಾದ್ ಎಂಬವರ ತೋಟಕ್ಕೆ ಹೋಗಿತ್ತು.
ಕೆಲ ಸಮಯದ ಬಳಿಕ ನಂತರ ಹೊಳೆದಾಟಿ ಮರ್ಲಾಜೆ ಹರಿರಾವ್ರವರ ತೋಟದ ಮೂಲಕ ಕಾಡು ಸೇರಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
- Advertisement -