- Advertisement -
- Advertisement -
ಮಧ್ಯಪ್ರದೇಶ: ಹುತಾತ್ಮ ಯೋಧನ ಪತ್ನಿ ಶಿಕ್ಷಕಿ ಹುದ್ದೆಯನ್ನು ತ್ಯಜಿಸಿ ಸೇನಾಧಿಕಾರಿಯಾಗಿ ದೇಶ ಸೇವೆ ಮಾಡುವ ನಿರ್ಧಾರವನ್ನು ಮಾಡಿದ್ದಾರೆ. ವೈದ್ಯಕೀಯ ನೇಮಕಾತಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ.
2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ದೀಪಕ್ ಸಿಂಗ್ ವೀರಮರಣವನ್ನಪ್ಪಿದರು. ಹುತಾತ್ಮ ಪತಿಯ ದುಃಖ ಹಾಗೂ ದೇಶಭಕ್ತಿಯಿಂದ ಶಿಕ್ಷಕಿ ಹುದ್ದೆ ತೊರೆದು ಸೇನೆಯಲ್ಲಿ ಅಧಿಕಾರಿಯಾಗಲು ನಿರ್ಧರಿಸಿದ್ದೇನೆ ಎಂದು ರೇಖಾ ಸಿಂಗ್ ಎಂದಿದ್ದಾರೆ.
ಎರಡನೇ ಪ್ರಯತ್ನದಲ್ಲಿ ಶ್ರಮಕ್ಕೆ ತಕ್ಕಫಲ ಸಿಕ್ಕಿದ್ದು, ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದೇನೆ. ನನ್ನ ಪತಿಯ ಕನಸನ್ನು ನನಸು ಮಾಡಲು ಮತ್ತು ಸಹೋದರಿಯರಿಗೆ ಸರಿದಾರಿ ತೋರಿಸಲು ಸೇನೆಗೆ ಬಂದಿದ್ದೇನೆ ಎಂದು ರೇಖಾ ಸಿಂಗ್ ಹೇಳಿದರು.
- Advertisement -