- Advertisement -
- Advertisement -
ಮಂಗಳೂರು: ಪತಿಯ ಅಗಲಿಕೆಯ ನೋವಿನಲ್ಲಿದ್ದ ಪತ್ನಿಯೊಬ್ಬರು ಗಂಡ ತೀರಿ ಹೋದ ನಾಲ್ಕು ದಿನಗಳಲ್ಲಿ ತಾವು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಡಾ| ಕೆ. ರಮಾನಾಥ ಮಲ್ಲಿ ಕುರಿಯಾಳ ಗುತ್ತು ಅವರ ಪತ್ನಿ, ವೇದಾ ಆರ್. ಮಲ್ಲಿ ಬಾಕ್ರಬೈಲುಗುತ್ತು (89) ನಿಧನ ಹೊಂದಿದವರು.ವರ ಪತಿ ರಮಾನಾಥ ಮಲ್ಲಿ ಅವರು ಮಾ. 15ರಂದು ನಿಧನರಾಗಿದ್ದರು. ಇಬ್ಬರೂ ಅನ್ಯೋನ್ಯವಾಗಿದ್ದು, ಪತಿಯ ಅಗಲುವಿಕೆಯ ಬೇಸರದಿಂದ ಚೇತರಿಸಿಕೊಳ್ಳದೆ ವೇದಾ ಮಂಗಳೂರಿನ ಪುತ್ರಿಯ ಮನೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
- Advertisement -