- Advertisement -
- Advertisement -
ಉಡುಪಿ: ಹಿಂದೂ ಭಾವನೆಗೆ ಧಕ್ಕೆ ತಂದ ಸತೀಶ್ ಜಾರಕಿಹೊಳಿ ಹೇಳಿಕೆಯ ವಿರುದ್ಧ ಸಿಎಂ ಬಸವರಾಜು ಬೊಮ್ಮಾಯಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಿಎಂ, ಹಿಂದೂ ವಿರೋಧಿ ಹೇಳಿಕೆಯಿಂದ ಅಲ್ಪಸಂಖ್ಯಾತರ ಮತ ಪಡೆಯಬಹುದು ಎಂಬ ಭ್ರಮೆ ಸತೀಶ್ ಜಾರಕಿಹೊಳಿಯದ್ದು. ಅವರೊಬ್ಬ ಅರೆಬರೆ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೇ ಮಾತನಾಡಿದ್ದಾರೆ. ಆದ್ರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಈ ಬಗ್ಗೆ ಮೌನ ವಹಿಸಿದ್ದು ನೋಡಿದ್ರೆ ಅವ್ರು ಸತೀಶ್ ಮಾತಿಗೆ ಸಮ್ಮತಿ ಕೊಟ್ಟಂತಿದೆ ಎಂದರು. ಆದ್ರೆ ಜಾರಕಿಹೊಳಿ ಹೇಳಿಕೆಯನ್ನು ರಾಜ್ಯದ ಜನ ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.
- Advertisement -