Thursday, May 9, 2024
Homeಕರಾವಳಿಉಡುಪಿಕಾರ್ಕಳ: ಮೋದಿ ಬಂದಾಗ ಜನಸಾಗರ ನೋಡಿ ಸಿದ್ದರಾಮಯ್ಯ ಭಯ ಪಟ್ಟಿದ್ದಾರೆ: ಸಿಎಂ

ಕಾರ್ಕಳ: ಮೋದಿ ಬಂದಾಗ ಜನಸಾಗರ ನೋಡಿ ಸಿದ್ದರಾಮಯ್ಯ ಭಯ ಪಟ್ಟಿದ್ದಾರೆ: ಸಿಎಂ

spot_img
- Advertisement -
- Advertisement -

ಕಾರ್ಕಳ:  ನೂರು ಬಾರಿ ಪ್ರಧಾನಿ ಮೋದಿ, ಅಮಿತ್‌ ಶಾ ರಾಜ್ಯಕ್ಕೆ ಭೇಟಿ ಕೊಟ್ಟರೂ ಕಾಂಗ್ರೆಸ್‌ ಗೆಲ್ಲೋದು ನೂರಕ್ಕೆ ನೂರು ಸತ್ಯ. ಮೋದಿ ಭೇಟಿಯಿಂದ ಬಿಜೆಪಿಗೆ ಏನೂ ಲಾಭವಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ರು.

ಕಾರ್ಕಳದಲ್ಲಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜು ಬೊಮ್ಮಾಯಿ, ರಾಹುಲ್‌ ಗಾಂಧಿ ಬಂದಾಗ ಜನ ಸೇರಲ್ಲ. ಅದಕ್ಕೆ ನಾವೇನೂ ಮಾಡಕ್ಕಾಗಲ್ಲ. ಆದ್ರೆ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗೆಲ್ಲಾ ಜನಸಾಗರವೇ ಹರಿದುಬಂದಿದೆ. ಅದನ್ನ ನೋಡಿ ಸಿದ್ದರಾಮಯ್ಯಗೆ ಭಯ ಆಗಿದೆ ಎಂದು ಹೇಳಿದ್ದಾರೆ. ಗುಲ್ಬರ್ಗಾ, ಮೈಸೂರು, ಮಂಗಳೂರಿನಲ್ಲೂ ಕೂಡಾ ಮೋದಿ ಬಂದಾಗ ಭಾರೀ ಸಂಖ್ಯೆಯಲ್ಲಿ ಜನ ಬಂದಿರೋದನ್ನ ಕಂಡು ಸಿದ್ದರಾಮಯ್ಯ ಭಯಗೊಂಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!