Sunday, April 28, 2024
Homeಕರಾವಳಿಉಡುಪಿಕುಂದಾಪುರ: ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು: ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ

ಕುಂದಾಪುರ: ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು: ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ

spot_img
- Advertisement -
- Advertisement -

ಕುಂದಾಪುರ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲ ಹೋರಾಟದ ಲಾಭ  ಬಿಜೆಪಿಗೆ ಹೋಗುತ್ತಿದೆ. ಆದರೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಕುಂದಾಪುರದಲ್ಲಿ ಮಾತನಾಡಿದ ಅವರು ,ಕೋಲಾರ ,ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು. ಬಿಜೆಪಿ ಇದ್ದಾಗಲೂ ಬ್ಯಾನ್ , ಕೇಸು, ಜೈಲು. ಬಿಜೆಪಿ ನನ್ನನ್ನು ಬ್ಯಾನ್ ಮಾಡುತ್ತದೆ ಅಂದ್ರೆ ಹೇಗೆ? ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು.

ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದುಗಳಿಂದಲೇ ಗೆದ್ದು ಬಂದವರು ನೀವು. ಹಿಂದುಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ  ಕಲಿಸಬೇಕಾಗುತ್ತೆ. ದೇಶದ ಹಿತಕ್ಕಾಗೆ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ  ಎಂದು ಗುಡುಗಿದ್ದಾರೆ.

- Advertisement -
spot_img

Latest News

error: Content is protected !!