ಬೆಳ್ತಂಗಡಿ : ಮಾನಸಿಕ ಅಸ್ವಸ್ಥತೆಯಿಂದ ಪತಿಯನ್ನು ಕೊಲೆ ನಡೆದಿರುವುದು ಪೊಲೀಸರ ತನಿಖೆಯಿಂದ ಖಚಿತವಾಗಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕೆರೆ ಮನೆಯಲ್ಲಿ ಇಂದು ಬೆಳಗ್ಗೆ ಸುಮಾರು 5:30 ವೇಳೆಗೆ ಮಲಗಿದ್ದ ಗಂಡನನ್ನೇ ಕತ್ತಿಯಿಂದ ತಲೆಗೆ ಹೆಂಡತಿ ಕಡಿದು ಕೊಲೆ ಮಾಡಲಾಗಿದೆ ಎಂದು ಪಕ್ಕದ ಮನೆಯ ನಿವಾಸಿ ಮ್ಯಾಥ್ಯೂ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಕಡುಬಡವರಾಗಿರುವ ಅಬಂನ್ ಕೆರೆ ನಿವಾಸಿಯಾಗಿರುವ ಪತಿ ಬೇಬಿ @ ಪೊಟ್ಟಸ್ ಬೇಬಿ @ ಯೋಹನ್ನಾನ್ (72) ಮತ್ತು ಪತ್ನಿ ನಲ್ಲಮ್ಮ @ ಎಲಿಯಮ್ಮ (56) ಇಬ್ಬರು ಮಾತ್ರ ವಾಸವಾಗಿರುವುದು @೧ಇವರಿಗೆ ಮೂವರು ಮಕ್ಕಳಿದ್ದು ಮಗಳನ್ನು ಮದುವೆ ಮಾಡಿ ಆಠ@೧ಕೊಡಲಾಗಿದ್ದು ಅವರು ಗಂಡನ ಜೊತೆ ದುಬೈ ನಲ್ಲಿದ್ದಾರೆ ,ಮತ್ತೊಬ್ಬ ಮಗ ಉಪ್ಪಿನಂಗಡಿಯಲ್ಲಿ ತೋಟವನ್ನು ಲೀಸ್ ಗೆ ಪಡೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕೊನೆಯ ಮಗ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

2013 ರಿಂದ ನಲ್ಲಮ್ಮ ಯಾನೆ ಎಲಿಯಮ್ಮ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಇವರಿಗೆ ಮಕ್ಕಳು ಚಿಕಿತ್ಸೆ ಕೊಡಿಸುತ್ತಿದ್ದರು ಕಳೆದ ತಿಂಗಳು ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿದ್ದರು. ಮತ್ತೆ ಚಿಕಿತ್ಸೆಗೆ ವೈದ್ಯರ ಸಲಹೆಯಂತೆ ಕರೆದೊಯ್ಯುಲು ತಯಾರಿ ಮಾಡಿದ್ದರು. ಸೋಮವಾರ ರಾತ್ರಿ 11 ಗಂಟೆ ವೇಳೆಗೆ ಗಂಡ -ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಣ್ಣಪುಟ್ಟ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಗಂಡ ಬೇಬಿ ಹೆಂಡತಿಗೆ ‘ನೀನು ವಾಸನೆ ಬರುತ್ತಿದ್ದಿಯಾ’ ಎಂದಿದ್ದಾರೆ. ಈ ವೇಳೆ ಹೆಂಡತಿ ತಿರುಗಿ ಮಲಗಿದ್ದರು. ಆದ್ರೆ ಗಂಡನಿಗೆ ನಿದ್ದೆ ಬಂದಿರಲಿಲ್ಲ. ಇಂದು ಬೆಳಗ್ಗೆ ಸುಮಾರು 5:30 ರ ವೇಳೆಗೆ ರಾತ್ರಿಯ ಕೋಪದಿಂದ ಮಂಚದಲ್ಲಿ ಮಲಗಿದ್ದ ಗಂಡನನ್ನು ತಲೆಗೆ ಕತ್ತಿಯಿಂದ ಕಡಿದಿದ್ದಾರೆ. ಈ ವೇಳೆ ಗಂಡ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟಿದ್ದಾರೆ, ಕಡಿಯುವ ವೇಳೆ ಹೆಂಡತಿಯ ಎಡಗೈಗೆ ಗಾಯವಾಗಿದೆ. ನಂತರ ಮನೆಯ ಹೊರಗಡೆ ಕತ್ತಿ ಹಿಡಿದು ತಿರುಗಾಡುತ್ತಿದ್ದರು, ಪಕ್ಕದ ಮನೆಯ ಮ್ಯಾಥ್ಯೂ ಎಂಬವರು ಎಂದಿನಂತೆ ತೋಟದ ಕೆಲಸ ಮಾಡಿಕೊಂಡು ಇವರ ಮನೆಗೆ ಬರುವಾಗ ಹೊರಗಡೆ ಗಾಯಗೊಂಡ ಕೈ ಹಿಡಿದುಕೊಂಡಿದ್ದನ್ನು ವಿಚಾರಿಸಿದಾಗ ‘ಒಳಗೆ ಹೋಗಿ ನೋಡಿ ಗೊತ್ತಾಗುತ್ತದೆ ‘ಎಂದಿದ್ದಾರೆ ಒಳಹೋದಾಗ ಮಂಚದಲ್ಲಿ ಕೊಲೆಯಾಗಿ ಬಿದ್ದಿರುವುದು ನೋಡಿದ್ದಾರೆ. ನಲ್ಲಮ್ಮ @ ಎಲಿಯಮ್ಮ ನಾವೂರು ಚರ್ಚ್ ಫಾದರ್ ಹಾಗೂ ಇತರರಿಗೂ ಕರೆ ನಾನು ಗಂಡನನ್ನು ಕೊಲೆ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ . ಸ್ಥಳೀಯರು ಬಂದು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಘಟನಾ ಸ್ಥಳ ಪರಿಶೀಲನೆ ನಡೆಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಗೆ ಹೋಗಿ ಇಲಿ ಪಾಷಣ ಕೇಳಿದ್ದ ಎಲಿಯಮ್ಮ ಭಾನುವಾರ ಸಂಜೆ ಮೂರು ಗಂಟೆ ಸುಮಾರಿಗೆ ಪಕ್ಕದ ಮೂರು ಮಾರ್ಗ ಅಂಗಡಿಗೆ ಹೋಗಿ ಪುಷ್ಪಾ ಎಂಬವರ ಬಳಿ ಇಲಿ ಪಾಷಣ ಇದೆಯಾ ಎಂದು ಕೇಳಿದ್ದಾರೆ ಈ ವೇಳೆ ಅವರ ಮಾನಸಿಕ ಅಸ್ವಸ್ಥತೆಯ ಬಗ್ಗೆ ತಿಳಿದು ಏನಾದರೂ ಮಾಡಿಕೊಳ್ಳುತ್ತಾರೆ ಎಂದು ನಮ್ಮಲ್ಲಿ ಇಲ್ಲ ಎಂದು ತಿಳಿಸಿದ್ದರು ಎಂದು ಅಂಗಡಿ ಮಾಲೀಕೆ ಪುಷ್ಪಾ ತಿಳಿಸಿದ್ದಾರೆ.
ಕೊಲೆ ಆರೋಪಿ ಹೆಂಡತಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್;
ಗಂಡನನ್ನು ಕೊಲೆ ಮಾಡಿದ ಹೆಂಡತಿ ಎಲಿಯಮ್ಮನಿಗೆ ಕೈಗೆ ಗಾಯವಾಗಿದ್ದು ಮತ್ತು ನಡೆದಾಡಲು ಅಗದೆ ಇರುವ ಕಾರಣಕ್ಕೆ ಬೆಳ್ತಂಗಡಿ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ.
ಬೇಬಿ @ ಪೊಟ್ಟಾಸ್ ಬೇಬಿ @ ಯೋಹನ್ನಾನ್ ಒಳ್ಳೆಯ ವ್ಯಕ್ತಿಯಾಗಿದ್ದು ಊರವರ ಜೊತೆ ಉತ್ತಮ ಸ್ವಭಾವವನ್ನು ಹೊಂದಿದ್ದಾರೆ ತನ್ನ ಮನೆಯಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಪತ್ನಿಯನ್ನು ಅಷ್ಟೆ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಬೇಬಿ ಒಂದು ಕಾಲದಲ್ಲಿ ಪೊಟ್ಟಾಸ್ ತಯಾರು ಮಾಡಿ ಹಂದಿ ಬೇಟೆ ಮಾಡುವುದರಲ್ಲಿ ಎತ್ತಿದ ಕೈ ಅದಕ್ಕಾಗಿಯೆ ಅವರಿಗೆ ಪೊಟ್ಟಾಸ್ ಬೇಬಿ ಎಂದು ಹೆಸರು ಇಟ್ಟಿದ್ದರು ಊರವರು.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ,ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ಮಂಗಳೂರು ಬೆರಳಚ್ಚು ವಿಭಾಗ ಡಿವೈಎಸ್ಪಿ ಗೌರೀಶ್ ಸಿಬ್ಬಂದಿಗಳಾದ ಸಚಿನ್, ಶಿವಕುಮಾರ್ ಬಂದು ಪರಿಶೀಲನೆ ನಡೆಸಿದ್ದಾರೆ.