- Advertisement -
- Advertisement -
ಉಡುಪಿ: ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿ ಇಂದು ಉಸ್ತುವಾರಿ ಸಚಿವ ಎಸ್ ಅಂಗಾರ ಉದ್ಘಾಟಿಸಿ ಮಾತನಾಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ಒಂದೊಂದು ರೀತಿಯ ನಿಯಮಾವಳಿ ಮಾಡಲು ಆಗಲ್ಲ. ಸರಕಾರ ಏನು ಕ್ರಮತೆಗೆದುಕೊಳ್ಳುತ್ತದೋ ಆ ರೀತಿ ಮಾಡುತ್ತೇವೆ. ಯಾರು ತಮ್ಮ ಮನಸಿಗೆ ಬೇಕಾದಂತೆ ನಿಯಮ ಮಾಡಲು ಆಗುವುದಿಲ್ಲ.
ತಜ್ಞರ ಸಮಿತಿ ಯನ್ನು ಸರ್ಕಾರ ರಚಿಸಿದೆ. ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಆದರೆ ಆಡಳಿತ ಮಂಡಳಿ ಸೂಚನೆ ಮೀರಿ ವಿದ್ಯಾರ್ಥಿಗಳು ವರ್ತಿಸಬಾರದು ಎಂದು ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ. ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಗರ ಅಧ್ಯಕ್ಷ ರು ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
- Advertisement -