- Advertisement -
- Advertisement -
ಉಡುಪಿ: ರಾಜ್ಯದಲ್ಲಿ ವಿಪಕ್ಷ ಕಾಂಗ್ರೆಸ್ ನಿಂದ ಪೇಸಿಎಂ ಅಭಿಯಾನ ನಡೆಯುತ್ತಿರುವ ಬೆನ್ನಲ್ಲೇ ಉಡುಪಿಯಲ್ಲಿ ವಿ ಆರ್ ವಿತ್ ಕಾಮನ್ ಸಿಎಂ ಎಂಬ ಅಭಿಯಾನ ನಡೆದಿದೆ
ಯೂತ್ ಫಾರ್ ಡೆವೆಲಪ್ಮೆಂಟ್ ಸಂಘಟನೆಯಿಂದ ಸಿಎಂಗೆ ಬೆಂಬಲವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವಾಗಿ ಯುವಕರು ಪೋಸ್ಟರ್ ಅಂಟಿಸಿದ್ದಾರೆ.
ಕಾಂಗ್ರೆಸ್ ನ ಪೇಸಿಎಂ ವಿರುದ್ಧದ ಅಭಿಯಾನವಾಗಿ ಬೊಮ್ಮಾಯಿ ಕಾಮನ್ ಸಿಎಂ ಎಂದು ಉಡುಪಿ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಯುವಕರು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕೂಡಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
ಹಿಂದೆ ರಾಜ್ಯದ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಬಸವರಾಜ ಬೊಮ್ಮಾಯಿ ಕಾರ್ಯನಿರ್ವಹಿಸಿದ್ದರು.
- Advertisement -