- Advertisement -
- Advertisement -
ಚಿಕ್ಕಮಗಳೂರು : ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಡೂರಿನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರಿಗೆ ಹಕ್ಕು ಪತ್ರ ನೀಡಲು ಕಡೂರು ಗ್ರಾಮ ಸಹಾಯಕ ಶಿವಣ್ಣ 10,000 ಲಂಚ ಸ್ವೀಕರಿಸುತ್ತಿದ್ದಾಗ ಕಡೂರಿನ ತಾಲೂಕು ಕಚೇರಿಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮುಂಗಡವಾಗಿ 3 ಸಾವಿರ ಶಿವಣ್ಣ ಲಂಚ ಪಡೆದಿದ್ದರು.ಉಳಿದ ಲಂಚ ಪಡೆಯುವಾಗ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಗ್ರಾಮ ಸಹಾಯಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
- Advertisement -