Friday, June 27, 2025
Homeಆರಾಧನಾಶ್ರೀಮಠ ಬಾಳೆಕುದ್ರುವಿನಿಂದ ವಂದೇ ಗುರುಪರಂಪರಾಮ್ ಉತ್ತರಾಧಿಕಾರೀ ಶಿಷ್ಯ ಸ್ವೀಕಾರ ಮಹೋತ್ಸವ

ಶ್ರೀಮಠ ಬಾಳೆಕುದ್ರುವಿನಿಂದ ವಂದೇ ಗುರುಪರಂಪರಾಮ್ ಉತ್ತರಾಧಿಕಾರೀ ಶಿಷ್ಯ ಸ್ವೀಕಾರ ಮಹೋತ್ಸವ

spot_img
- Advertisement -
- Advertisement -

ಉಡುಪಿ: ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯ ಶ್ರೀಮಠ ಬಾಳೆಕುದ್ರುವಿನಿಂದ ವಂದೇ ಗುರುಪರಂಪರಾಮ್ ಉತ್ತರಾಧಿಕಾರೀ ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮವನ್ನು 2024 ನ. 23 ಶನಿವಾರದಿಂದ 25 ಸೋಮವಾರದವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಿಯ ಮಹಾಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು: ನ. 23 ಶನಿವಾರದಂದು ಗಣಪತಿ ಪೂಜಾ, ಪುಣ್ಯಾಯ, ಕೃಚ್ಛ್ರ, ಸಂನ್ಯಾಸ ಗ್ರಹಣ ಸಂಕಲ್ಪ, ಆದಿತ್ಯಾದಿ ನವಗ್ರಹ ಹೋಮ, ಗೋದಾನ, ಪವಮಾನ ಪ್ರಾಯಶ್ಚಿತ ಹೋಮ, ಗಣಪತಿ ಹೋಮ, ಗಾಯತ್ರೀ ಹೋಮ, ಶ್ರೀ ಲಕ್ಷ್ಮೀನರಸಿಂಹ ಹೋಮ ನಡೆಯಲಿದೆ.

ನ. 24 ಭಾನುವಾರದಂದು ಅಷ್ಟಶ್ರಾದ್ಧ ಪುಣ್ಯಾಯ, ಗಣಪತಿ ಪೂಜಾ, ನಾಂದಿ ಶ್ರಾದ್ಧ, ಮಾತೃಕಾ ಪೂಜಾ, ಬ್ರಹ್ಮಾನ್ವಾಧಾನ, ಪ್ರಾಣಾದಿ ಹವನ, ಪುರುಷಸೂಕ್ತ ಹೋಮ, ವಿರಜಾ ಹೋಮ ನಡೆಯಲಿದೆ.

ನ. 25 ಸೋಮವಾರದಂದು ತೀರ್ಥಸ್ನಾನ, ಸಾವಿತ್ರೀ ಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯವಸ್ತ್ರ ಧಾರಣೆ, ಜಗನ್ಮಾತೆಯ ದರ್ಶನ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂಕ ಶೌಚ, ಯೋಗಪಟ್ಟ, ಬ್ರಹ್ಮವಿದಾಶೀರ್ವಚನ ನಡೆಯಲಿದೆ.

- Advertisement -
spot_img

Latest News

error: Content is protected !!