- Advertisement -
- Advertisement -
ಬಂದಾರು: ಲಾಕ್ ಡೌನ್ ಸಮಯವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಬಂದಾರಿನ ಜೈ ಶ್ರೀ ರಾಮ್ ಗೆಳೆಯರ ಬಳಗ (ರಿ ) ಅರಣ್ಯ ಇಲಾಖೆ ಜೊತೆಗೂಡಿ ವನಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಅಧಿಕಾರಿಗಳ ಜೊತೆಗೂಡಿ ಬಂದಾರು ಶ್ರೀ ರಾಮನಗರದ ಸಾರ್ವಜನಿಕ ಸ್ಮಶಾನದ ಸುತ್ತಮುತ್ತ ಸುಮಾರು 150ಕಿಂತಲೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಬಿ. ಕೆ, ಅರಣ್ಯ ರಕ್ಷಕರಾದ ಜಗದೀಶ್, ಜೈ ಶ್ರೀ ರಾಮ್ ಗೆಳೆಯ ಬಳಗ ದ ಅಧ್ಯಕ್ಷರ ಕುಶಾಲಪ್ಪ, ಕಾರ್ಯದರ್ಶಿ ಶ್ರೀಧರ್ ಹಾಗೂ ಬಳಗ ಸದಸ್ಯರು ಭಾಗವಹಿಸಿದ್ದರು.
- Advertisement -