- Advertisement -
- Advertisement -
ಲಖನೌ: ಭಾರೀ ವಿವಾದಕ್ಕೆ ಕಾರಣವಾಗಿದ್ದ 46 ವರ್ಷದ ಆರೋಗ್ಯ ಕಾರ್ಯಕರ್ತನ ಸಾವು ಪ್ರಕರಣ ಈಗ ಇತ್ಯರ್ಥವಾಗಿದೆ. ಕೋವಿಡ್-19 ಲಸಿಕೆ ಪಡೆದ 24 ಗಂಟೆಗಳಲ್ಲೇ ಮೃತಪಟ್ಟ ಈತನ ಸಾವಿಗೆ ಲಿಸಿಕೆ ಕಾರಣವಲ್ಲ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಾರ್ಡ್ ಬಾಯ್ ಮಹಿಪಾಲ್ ಸಾವಿಗೆ ಲಸಿಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಮೃತ ಮಹಿಪಾಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶ ಆರೋಗ್ಯ ಅಧಿಕಾರಿಗಳು ತಿಳಿಸಿದ್ದು ಆತಂಕ ದೂರವಾಗಿದೆ.
- Advertisement -