- Advertisement -
- Advertisement -
ಮಂಗಳೂರು.ಸೆ-23: ದ.ಕ. ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕಗೊಳಿಸಿ ಆದೇಶ ನೀಡಲಾಗಿದೆ.
ಮಾಧ್ಯಮಗಳಲ್ಲಿ ಪಕ್ಷದ ವಿಚಾರಗಳು ಹಾಗೂ ದೃಷ್ಥಿಕೋನಗಳು ಪರಿಣಾಮಕಾರಿಯಾಗಿ ಬಿಂಬಿತಗೊಳ್ಳಬೇಕು. ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮಾರ್ಥ್ಯವನ್ನು ಯು.ಟಿ. ಖಾದರ್ ಹೊಂದಿರುವ ಕಾರಣದಿಂದಾಗಿ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
- Advertisement -