Sunday, May 5, 2024
Homeಕರಾವಳಿಬೆಳ್ತಂಗಡಿ : ಮಿಯ್ಯಾರು ರಕ್ಷಿತಾರಣ್ಯದೊಳಗೆ ಮರ ಕಡಿದು ದಾಸ್ತಾನು:ಉಪ್ಪಿನಂಗಡಿ ಅರಣ್ಯಾಧಿಕಾರಿಗಳಿಂದ ಸ್ಥಳಕ್ಕೆ ದಾಳಿ: ಸ್ಥಳದಲ್ಲಿಯೇ ಓರ್ವನ...

ಬೆಳ್ತಂಗಡಿ : ಮಿಯ್ಯಾರು ರಕ್ಷಿತಾರಣ್ಯದೊಳಗೆ ಮರ ಕಡಿದು ದಾಸ್ತಾನು:ಉಪ್ಪಿನಂಗಡಿ ಅರಣ್ಯಾಧಿಕಾರಿಗಳಿಂದ ಸ್ಥಳಕ್ಕೆ ದಾಳಿ: ಸ್ಥಳದಲ್ಲಿಯೇ ಓರ್ವನ ಬಂಧನ; ಮತ್ತೊರ್ವ ಪರಾರಿ

spot_img
- Advertisement -
- Advertisement -

ಬೆಳ್ತಂಗಡಿ : ರಕ್ಷಿತಾರಣ್ಯದೊಳಗೆ ಅಕ್ರಮವಾಗಿ ಬೇಂಗ ಮರ ಕಡಿದು ದಾಸ್ತಾನು ಮಾಡುತ್ತಿದ್ದಾಗ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿ, ಮತ್ತೊಬ್ಬ ಆರೋಪಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆಯಲ್ಲಿ ಸಪ್ಟೆಂಬರ್ 6 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆ ಎಂಬಲ್ಲಿ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೇಂಗ ಜಾತಿಯ ಮರವನ್ನು ಬೆಳಗ್ಗೆಯಿಂದ ಕಡಿದು ದಾಸ್ತಾನು ಮಾಡುತ್ತಿದ್ದು ಈ ವೇಳೆ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮಧ್ಯಾಹ್ನದ ವೇಳೆ ದಾಳಿ ಮಾಡಿದ್ದಾರೆ.ದಾಳಿ ವೇಳೆ ಶಿಶಿಲ ಗ್ರಾಮದ ದೇವಸ ನಿವಾಸಿ ಸೇಸಪ್ಪ ಗೌಡರ ಮಗ ಧರ್ಣಪ್ಪ ಗೌಡ(46) ಬಂಧಿಸಿದ್ದು. ಮತ್ತೊಬ್ಬ ಆರೋಪಿ ಹೇವಾಜೆ ನಿವಾಸಿ ಅಜಿತ್ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಒಂದು ಕಟ್ಟಿಂಗ್ ಮೀಷಿನ್, ಗರಗಸ ವಶಪಡಿಸಿಕೊಂಡಿದ್ದು ಇದರ ಮೌಲ್ಯ 13 ಸಾವಿರ ಅಗಿದ್ದು. ಕಡಿದ ಒಂದು ಬೇಂಗ ಮರದ ಮೌಲ್ಯ 1 ಲಕ್ಷದ 26 ಸಾವಿರ ಅಗಿದ್ದು. ವಶಪಡಿಸಿಕೊಂಡ ಒಟ್ಟು ಮೌಲ್ಯ 1 ಲಕ್ಷದ 39 ಸಾವಿರ ಅಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ.ಕೆ ಮಾರ್ಗದರ್ಶನಲ್ಲಿ ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್ , ಉಪವಲಯ ಅರಣ್ಯಾಧಿಕಾರಿ ಭರತ್ , ಅರಣ್ಯಪಾಲಕ ಸನತ್, ವಿನಯಚಂದ್ರ , ರಾಜೇಶ್, ಲಿಂಗಪ್ಪ, ಸುನಿಲ್ ನಾಯ್ಕ್ , ಚಾಲಕ ಕಿಶೋರ್  ಕಾರ್ಯಾಚರಣೆ ಭಾಗವಹಿಸಿದರು

- Advertisement -
spot_img

Latest News

error: Content is protected !!