ಮಂಗಳೂರು: ಕೊರೋನಾ ಕ್ವಾರೆಂಟಿನ್ ಸಮಯದಲ್ಲಿ ಒಂದಲ್ಲ ಒಂದು ಬೇಜವಾಬ್ದಾರಿ ಮೂಲಕ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ, ಇದೀಗ 6 ತಿಂಗಳ ಗರ್ಭಿಣಿ ಮಹಿಳೆಯನ್ನು ಕಣ್ಣೀರಿನಲ್ಲಿ ಕಳೆಯುವಂತೆ ಮಾಡಿದೆ.
ವಿದೇಶದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ ಉಪ್ಪಿನಂಗಡಿ ಮೂಲದ 6 ತಿಂಗಳ ಗರ್ಭಿಣಿಗೆ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಗರ್ಭಿಣಿಯರ ಕ್ವಾರಂಟೈನ್ ಬಗ್ಗೆ ಇರುವ ಮಾರ್ಗಸೂಚಿಯನ್ನು ಪಾಲಿಸದೆ ತನ್ನ ತನ್ನ ನಿರ್ಲ್ಯಕ್ಷ ಧೋರಣೆಯನ್ನು ಅನುಸರಿಸುತ್ತಿರುವ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಗರ್ಭಿಣಿಯರಿಗೆ, ಮಕ್ಕಳಿಗೆ ಮತ್ತು 60 ವರ್ಷದ ಮೇಲ್ಪಟ್ಟವರಿಗೆ 48 ಗಂಟೆಯೊಳಗೆ ಗಂಟಲು ದ್ರವ ಟೆಸ್ಟ್ ಮಾಡಿ, ವರದಿಯಲ್ಲಿ ಕೊರೋನಾ ನೆಗೆಟಿವ್ ಬಂದರೆ ಹೋಂ ಕ್ವಾರೆಂಟಿನ್ ಗೆ ಕಳುಹಿಸಬೇಕು ಮತ್ತು ಪಾಸಿಟಿವ್ ಬಂದರೆ ಐಸೋಲೇಷನ್ ವಾರ್ಡ್ ಗೆ ಸೇರಿಸಿ ಚಿಕಿತ್ಸೆ ನೀಡಬೇಕು


