- Advertisement -
- Advertisement -
ಬೆಂಗಳೂರು: ಬಜೆಟ್ ಮಂಡನೆ ಗದ್ದಲದ ನಡುವೆ ಶಾಸಕನಲ್ಲದ ವ್ಯಕ್ತಿಯೋರ್ವ ವಿಧಾನಸಭೆ ಪ್ರವೇಶಿಸಿ ಶಾಸಕರ ಆಸನದಲ್ಲಿ ಕುಳಿತಿದ್ದ ಘಟನೆ ಇಂದು ವಿಧಾನಸಭೆಯಲ್ಲಿ ನಡೆದಿದೆ.
ನಾನು ಶಾಸಕ ಒಳಗೆ ಬಿಡ್ರೀ ಎಂದು ಮಾರ್ಷಲ್ ಗಳನ್ನು ಗದರಿಸಿ ಚಿತ್ರದುರ್ಗ ಮೂಲದ ತಿಪ್ಪೇರುದ್ರ ಎಂಬ ವ್ಯಕ್ತಿ ವಿಧಾನಸಭೆ ಪ್ರವೇಶಿಸಿ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್ ಅವರ ಆಸನದಲ್ಲಿ ಕುಳಿತಿದ್ದನು. ಇದನ್ನು ಗಮನಿಸಿದ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಅನುಮಾನಗೊಂಡು ವಿಚಾರಿಸಿದಾಗ ತಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ್ದ ಎನ್ನಲಾಗಿದೆ.
ನಂತರ ಶಾಸಕ ಶರಣಗೌಡ ಈ ವಿಚಾರವನ್ನು ಸ್ಪೀಕರ್ ಗಮನಕ್ಕೆ ತಂದಾಗ ಅಪರಿಚಿತ ವ್ಯಕ್ತಿ ಸದನದಿಂದ ಹೊರಗೆ ತೆರಳಿ ತಪ್ಪಿಸಿಕೊಂಡಿದ್ದಾನೆ.
ಅನಂತರ ಪೊಲೀಸರು ತಿಪ್ಪೇರುದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ಶಾಸಕ ಸ್ಥಾನದ ಹೆಸರು ದುರುಪಯೋಗ ಮತ್ತು ಅತಿಕ್ರಮ ಪ್ರವೇಶದ ಪ್ರಕರಣ ದಾಖಲಾಗಿದೆ.
- Advertisement -