ಉಪ್ಪಿನಂಗಡಿ: ಅಪರಿಚಿತ ಯುವಕನೋರ್ವ ಮಲಗಿದ್ದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
script async src=”https://pagead2.googlesyndication.com/pagead/js/adsbygoogle.js”>
ಹಿಂದಿ ಭಾಷೆ ಮಾತನಾಡುವ ವ್ಯಕ್ತಿಯೋರ್ವ ಉಪ್ಪಿನಂಗಡಿ ಬಳಿಯ ಕ್ಲಿನಿಕ್ ಒಂದಕ್ಕೆ ರಾತ್ರಿ ಆಗಮಿಸಿದ್ದು, ಈತನನ್ನು ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಈತನ ಎದೆಬಡಿತ ಕಮ್ಮಿ ಇದೆಯೆಂದು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಲು ತಿಳಿಸಿದ್ದರು. ಆದರೆ ಆತ ತನಗೆ ಇಲ್ಲಿ ನನ್ನವರು ಯಾರೂ ಇಲ್ಲ ಎಂದಾಗ, ಆತನನ್ನು ಅಲ್ಲೇ ಕುಳಿತುಕೊಳ್ಳಲು ಹೇಳಿ 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದರು. ಆ್ಯಂಬುಲೆನ್ಸ್ ಸ್ವಲ್ಪ ತಡವಾಗಿ ಬಂದಿತ್ತಾದರೂ, ಅಷ್ಟರಲ್ಲಿ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ.
ಸುಮಾರು ಎರಡು ಗಂಟೆಯ ನಂತರ ಆಸ್ಪತ್ರೆಯ ಹೊರಗಡೆ ಸ್ವಲ್ಪ ದೂರದಲ್ಲಿ ಈತ ಮಲಗಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವೈದ್ಯರಲ್ಲಿ ಈತ ತನ್ನ ಹೆಸರನ್ನು ರಾಜೇಶ್ ಎಂದು ಹೇಳಿದ್ದು, ತಾನು ಇಲ್ಲಿ ಕೆಲಸಕ್ಕಿರುವುದಾಗಿ ತನ್ನ ಮಾಲಕನ ಮೊಬೈಲ್ ಸಂಖ್ಯೆ ಕೊಟ್ಟಿದ್ದ. ಆದರೆ ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಬರುತ್ತಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.