- Advertisement -
- Advertisement -
ಉಡುಪಿ; ಇಲ್ಲಿನ ಉದ್ಯಾವರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಿಸರ್ಜನಾ ಮೆರವಣಿಗೆಯೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಗಣೇಶ ವಿಸರ್ಜನಾ ಮೆರವಣಿಗೆ ಗುಡ್ಡೆಅಂಗಡಿ ತಲುಪುತ್ತಿದ್ದಂತೆ ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಯ ಕಥೊಲಿಕ್ ಸಭಾ ಹಾಗೂ ಸೌಹಾರ್ದ ಸಮಿತಿ ಉದ್ಯಾವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಮತ್ತು ಸಾರ್ವಜನಿಕರಿಗೆ ತಂಪು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆದು ನಾವೆಲ್ಲಾ ಒಂದು ಅನ್ನೋ ಸಂದೇಶ ಸಾರಿದ್ದಾರೆ.
- Advertisement -