- Advertisement -
- Advertisement -
ನ್ಯೂಸ್ ಡೆಸ್ಕ್; ಅಂಡರ್ ವೇರ್ ನೀರಿಗೆ ಬಿತ್ತು ಅಂತಾ ಮೀನುಗಾರನೊಬ್ಬ ಸಮುದ್ರಕ್ಕೆ ಇಳಿದು ಮೇಲಕ್ಕೆ ಬಾರಲಾಗದೇ ನಗೆಪಾಟಲೀಗೀಡಾಗಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕೂಡಲೇ ಜೊತೆಯಲ್ಲಿದ್ದ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ಕೇಳಿಸುತ್ತಿರುವ ಧ್ವನಿ ಸಖತ್ ಮಜವಾಗಿದೆ. ಮೇಲ್ಭಾಗದಲ್ಲಿದ್ದವರು ಎಂತಾ ಕರ್ಮ ಮಾರಾಯ…ಚಡ್ಡಿ ತೆಗೆಯಲು ಯಾರಾದರು ನೀರಿಗೆ ಹಾರ್ತಾರಾ…ಅದು ನೂರು ರೂಪಾಯಿಗೆ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಕರಾವಳಿಯ ಮೀನುಗಾರಿಕಾ ಬಂದರೊಂದರಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
- Advertisement -