- Advertisement -
- Advertisement -
ಉಡುಪಿ: ಕಾಂಪೌಂಡ್ ಗೋಡೆ ಕುಸಿದು ಮನೆಗೆ ಹಾನಿಯಾಗಿರುವ ಘಟನೆ ಗ್ರಾಮದ ಪ್ರಗತಿ ನಗರದಲ್ಲಿ ನಡೆದಿದೆ.
ಮನೆಯೊಂದರ ಮೇಲೆ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಮನೆ ಮಾಲಕಿ ಸುಮಾ ರಮೇಶ್ ಆಚಾರ್ಯ ಬೆಕ್ಕಿಗೆ ತಿಂಡಿ ಹಾಕಲು ಹೊರ ಬಂದಿದ್ದಾಗ ಈ ಘಟನೆ ನಡೆದಿದ್ದರಿಂದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
- Advertisement -