- Advertisement -
- Advertisement -
ಉಡುಪಿ: ಉಡುಪಿಯಲ್ಲಿ ಈ ಬಾರಿ ಸರಳ ಕೃಷ್ಣಜನ್ಮಾಷ್ಟಮಿ ನಡೆಯುತ್ತಿದ್ದು, ಕೃಷ್ಣ ಜಯಂತಿ ಪ್ರಯುಕ್ತ ಸೋಮವಾರ ಬಾಲಕೃಷ್ಣನ ಅಲಂಕಾರ ಮಾಡಿ ಪೂಜಿಸಲಾಯಿತು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಅಲಂಕಾರ ಪೂಜೆ ನಡೆಸಿದರೆ, ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.
ನಿಂತ ಭಂಗಿಯಲ್ಲಿರುವ ಉಡುಪಿಯ ಕೃಷ್ಣನ ಮೂರ್ತಿಯನ್ನು ಇಂದು ನೋಡಿದವರಿಗೆ, ಬಾಲ ಕೃಷ್ಣನಾಗಿ ಕಣ್ತುಂಬಿಕೊಳ್ಳುವ ಅವಕಾಶ.ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಪರ್ಯಾಯ ಅದಮಾರು ಸ್ವಾಮಿಗಳು ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ಅರ್ಪಿಸಿದರು
- Advertisement -