- Advertisement -
- Advertisement -
ಉಡುಪಿ: ಕಂಡವರ ದುಡ್ಡನ್ನು ಗುಳುಂ ಮಾಡುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಉಡುಪಿಯ ಆಟೋ ಚಾಲಕರೊಬ್ಬರು ಮಹಿಳೆಯೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ₹50ಸಾವಿರವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಅಂಬಲಪಾಡಿಯ ಆಟೋ ಚಾಲಕ ಜಯ ಶೆಟ್ಟಿ ಮಹಿಳೆಯೊಬ್ಬರನ್ನು ಅಂಬಲಪಾಡಿಯಿಂದ ಕಟಪಾಡಿಗೆ ಬಿಟ್ಟು ಮತ್ತೆ ವಾಪಾಸ್ ಅಂಬಲಪಾಡಿ ರಿಕ್ಷಾ ನಿಲ್ದಾಣಕ್ಕೆ ಹಿಂದಿರುಗಿದ್ದರು. ಈ ವೇಳೆ ಅವರಿಗೆ ಆಟೋದಲ್ಲಿ ಪ್ಲಾಸ್ಟಿಕ್ ಕವರ್ ಸಿಕ್ಕಿದೆ. ಅದರಲ್ಲಿರು ಹಣ ಹಾಗೂ ದಾಖಲೆಗಳನ್ನು ನೋಡಿದ ಅವರು ಕೂಡಲೇ ಕಟಪಾಡಿಗೆ ಹೋಗಿ ಮಹಿಳೆಯನ್ನು ಹುಡುಕಿ ಹಣ ಹಾಗೂ ದಾಖಲೆ ಪತ್ರವನ್ನು ಹಿಂದಿರುಗಿಸಿದ್ದಾರೆ.
ಒಟ್ಟು 50 ಸಾವಿರ ಹಣ ಇದ್ದಿದ್ದಾಗಿ ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಜಯಶೆಟ್ಟಿ ಅವರಿಗೆ ಮಹಿಳೆ ಕೃತಜ್ಞತೆ ತಿಳಿಸಿದ್ದಾರೆ.
- Advertisement -