ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿ 9 ಮಂದಿ ಗುರುವಾರ ರಾಜ್ಯ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. ಸಿಎಂ ಉದ್ಧವ್ ಠಾಕ್ರೆ ವಿಧಾನ ಪರಿಷತ್ಗೆ ಆಯ್ಕೆಯಾಗುವುದರೊಂದಿಗೆ ಅವರ ಮುಖ್ಯಮಂತ್ರಿ ಹುದ್ದೆ ಗಟ್ಟಿಯಾಗಿದೆ.
2019ರ ನ.28ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಉದ್ಧವ್ ಏಪ್ರಿಲ್ 27ರೊಳಗೆ ವಿಧಾನ ಪರಿಷತ್ ಅಥವಾ ಶಾಸಕರಾಗಬೇಕಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆ ಕೂಡ ಮುಂದೂಡಲಾಗಿತ್ತು. ರಾಜ್ಯಪಾಲರ ಕೋಟಾದಲ್ಲಿ ಸಿಎಂರನ್ನು ನೇಮಕ ಮಾಡುವ ಬಗ್ಗೆ ಮಹಾರಾಷ್ಟ್ರ ವಿಕಾಸ ಅಘಾಡಿ ಸಂಪುಟ ಶಿಫಾರಸು ಮಾಡಿದ್ದರೂ, ಆದರೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಕರೊನಾ ವೈರಸ್ ಸೋಂಕು ಹಾವಳಿ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಒಪ್ಪಿರಲಿಲ್ಲ.
ಇದರಿಂದ ಗರಂ ಆಗಿದ್ದ ಸಿಎಂ ಉದ್ಧವ್ ನೇರವಾಗಿ ಪ್ರಧಾನಿ ಫೋನ್ ಮಾಡಿ ತಮ್ಮ ನೇತೃತ್ವದ ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದರು. ನಂತರ ಪರಿಷತ್ ಚುನಾವಣೆಗೆ ಅವಕಾಶ ಕಲ್ಪಿಸಲಾಯಿತು. ಠಾಕ್ರೆ ಜತೆಗೆ ಪರಿಷತ್ ಉಪಸಭಾಪತಿ ನೀಲಂ , ಬಿಜೆಪಿಯಿಂದ ರಂಜಿತ್ಸಿನ್ಹಾ ಮೊಹಿತ್ ಪಾಟೀಲ್, ಗೋಪಿಚಂದ್ ಪಡಲ್ಕರ್, ಪ್ರವೀಣ್ , ರಮೇಶ್ ಕಾರಾದ್, ಎನ್ಸಿಪಿಯಿಂದ ಶಶಿಕಾಂತ್ ಶಿಂಧೆ, ಅಮೂಲ್ ಮಿಟ್ಕರಿ ಹಾಗೂ ಕಾಂಗ್ರೆಸ್ನಿಂದ ರಾಜೇಶ್ ರಾಥೋಡ್ ಪರಿಷತ್ಗೆ ಆಯ್ಕೆಯಾಗಿದ್ದಾರೆ