Friday, June 5, 2026
Homeಕರಾವಳಿಬಂಟ್ವಾಳ: ತೆರೆದ ಕ್ವಾರಿ ಹೊಂಡದಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಜಲಸಮಾಧಿ..!

ಬಂಟ್ವಾಳ: ತೆರೆದ ಕ್ವಾರಿ ಹೊಂಡದಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಜಲಸಮಾಧಿ..!

- Advertisement -
- Advertisement -

ಬಂಟ್ವಾಳ ಪುರಸಭಾ ವ್ಯಾಪ್ತಿಯ ನರಿಕೊಂಬು ಗ್ರಾಮದ ಸರಹದ್ದಿನಲ್ಲಿ ಎಳಬೆ ಎಂಬಲ್ಲಿ ನಡೆದ ಘೋರ ಘಟನೆಯೊಂದರಲ್ಲಿ ಸ್ನಾನ ಮಾಡಲು ನಿಂತ ನೀರಿರುವ ಕ್ವಾರಿ ಹೊಂಡಕ್ಕೆ ಬಿದ್ದು ಇಬ್ಬರು ಜಲಾವೃತಗೊಂಡ ಘಟನೆ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದೆ.

ಸ್ಥಳೀಯರಾದ ಜಗದೀಶ್ (45), ಅಲ್ಲಿಪಾದೆ ಗ್ರಾಮದ ನಿದೀಶ್ (17) ಮೃತರು. ಮೃತರಿಬ್ಬರೂ ಸ್ನಾನ ಮಾಡಲು ತೆರೆದ ಕ್ವಾರಿಯೊಳಗಿದ್ದ ಹೊಂಡಕ್ಕೆ ಹೋಗಿದ್ದರು ಎನ್ನಲಾಗಿದೆ. ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳದಲ್ಲಿ ಭಾರೀ ಜನ ಜಮಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೇಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಈ ಹಿಂದೆ ನರಿಕೊಂಬು ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಅಲ್ಲಿನ ಕಾರ್ಯಾಚರಣೆಯಿಂದ ಸಮೀಪದ ಮನೆಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಇಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದಾಗ್ಯೂ ಮನವಿಗಳು ಮತ್ತು ಪ್ರತಿಭಟನೆಗಳಿಗೆ ಕಿವಿಗೊಡದೆ ಕ್ವಾರಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು. ಅದೇ ಕ್ವಾರಿಯಲ್ಲಿ ಸದ್ಯದ ದುರಂತ ನಡೆದಿದೆ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಭೇಟಿಗೆ ಆಗ್ರಹಿಸಿ ಸ್ಥಳೀಯರು ಇಲ್ಲಿಯವರೆಗೆ ಶವಗಳ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!