ಮಡಿಕೇರಿ: ಉಕ್ರೇನ್ ನಲ್ಲಿ ಕೊಡಗಿನ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಅಪಾಯಕ್ಕೆ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿರಾಜಪೇಟೆ ತಾಲ್ಲೂಕಿನ ಆರ್ರ್ಜಿ ಗ್ರಾಮದ ಶಾರುಖ್ (21) ಅಪಾಯಕ್ಕೆ ಸಿಲುಕಿದ ವಿದ್ಯಾರ್ಥಿಯಾಗಿದ್ದು, ಸದ್ಯ ಉಕ್ರೇನ್ ನ ಖಾರ್ಕಿವ್ ಪ್ರಾಂತ್ಯದಲ್ಲಿ ಶಾರುಖ್ ಇದ್ದು, ರಕ್ಷಣೆಗಾಗಿ ಮೆಟ್ರೋ ನೆಲಮಹಡಿ ಸೇರಿಕೊಂಡಿದ್ದಾರೆ. ಶಾರುಖ್ ವಿಎನ್ ಖಾರ್ಕಿವ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿದ್ದು, ನಿನ್ನೆ ಸಂಜೆಯಿಂದ ಶಾರುಖ್ ಪೋಷಕರಿಗೆ ಮಗನ ಸಂಪರ್ಕ ಕಡಿತವಾಗಿದೆ ಎನ್ನಲಾಗಿದೆ.
ಅಲ್ಲದೇ ಕೊಡಗಿನ ಮತ್ತೋರ್ವ ವಿದ್ಯಾರ್ಥಿನಿ ಅಲಿಷಾ (22) ಅಪಾಯಕ್ಕೆ ಪರಿಸ್ಥಿತಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪೋಲೆಂಡ್ ಗಡಿ ಬಳಿಯ ಇವಾನೋ ಫ್ರಾನ್ಸಿಸ್ಕೊ ನಗರದಲ್ಲಿ ಆಲಿಷಾ ಇದ್ದು, ಗೋಣಿಕೊಪ್ಪಲಿನ ಕಾವೇರಿ ಬಡಾವಣೆ ನಿವಾಸಿಯಾಗಿದ್ದಾರೆ. ಈ ಮಧ್ಯೆ ಕೊಡಗಿನ ಇನ್ನೂ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಅಪಾಯದ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.