- Advertisement -
![]()
- Advertisement -
ಕೇರಳದ ಪೊಯ್ನಾಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಮಂಗಳೂರು ಮೂಲದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ (ಜನವರಿ 19 ರ ರಾತ್ರಿ ನಡೆದಿದೆ. ಮಂಗಳೂರು ಮೂಲದ ಆಸಿಫ್ ಮತ್ತು ಶೆಫೀಕ್ ಮೃತರು. . ಮಂಜೇಶ್ವರಂ ಮೂಲದ ಇಬ್ಬರು ಗಾಯಗೊಂಡಿದ್ದಾರೆ.
ದೆವಯನಾಡಿನಲ್ಲಿ ರಜೆ ಮುಗಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದಾಗ. ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನಿಂದ ಗಾಯಾಳು ಗಳನ್ನು ತೆಗೆಯಲು ಹರಸಾಹಸಪಡಬೇಕಾಗಿತ್ತು ಎನ್ನಲಾಗಿದೆ.
- Advertisement -


