ಚಿಕ್ಕಮಗಳೂರಿನ ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ರಾಗಿ ಮುದ್ದೆ ಹಾಗೂ ಅನ್ನ ಊಟ ಮಾಡಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ದೊಡ್ಡ ಯಲ್ಲಪ್ಪ (75), ಯಲ್ಲಮ್ಮ (50) ಎಂದು ಗುರುತಿಸಲಾಗಿದೆ.
ಕುಟುಂಬದ ಮೂವರು ಜನರು ದಿನವಿಡೀ ಮಧ್ಯ ಸೇವಿಸಿದ್ದು, ನಿರಂತರ ಮಧ್ಯಪಾನದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ವಿವರ: ಮೂವರು ಕೂಡ ಮದ್ಯಪಾನ ಮಾಡಿ ಬಳಿಕ ಊಟ ಮಾಡಿ ಹೊಟ್ಟೆ ನೋವು ಎಂದು ನರಳಾಟ ಶುರು ಮಾಡಿದ್ದರು. ಯಲ್ಲಪ್ಪ ಮನೆಯಲ್ಲೇ ಸಾವನ್ನಪ್ಪಿದ್ದು, ಯಲ್ಲಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲ ಆತ್ಮಹತ್ಯೆಗೆ ಯತ್ನಿಸಿದರೋ ಅಥವಾ ಗೊತ್ತಿಲ್ಲದೆ ಊಟದಲ್ಲಿ ವಿಷ ಬಿದ್ದಿತ್ತೋ ಎಂಬುವುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಸದ್ಯ ರಾಗಿ ಮುದ್ದೆ ಅಥವಾ ಅನ್ನದಲ್ಲಿ ವಿಷ ಸೇರಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.