- Advertisement -
- Advertisement -
ಕಡಬ: ಕಾಣಿಯೂರಿನ ಬೈತಡ್ಕ ಸೇತುವೆಯಿಂದ ಕೆಳಗೆ ಕಾರು ಬಿದ್ದಿದ್ದು ಪ್ರಕರಣದಲ್ಲಿ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಅಲ್ಲದೇ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ ಎನ್ನಲಾಗಿದೆ. ನಾಪತ್ತೆಯಾದವರಿಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಕಾರಿನಲ್ಲಿದ್ದವರು ವಿಟ್ಲ ಮೂಲದವರು ಎನ್ನಲಾಗಿದ್ದು, ನದಿಗೆ ಬೀಳುವ ವೇಳೆ ಕಾರಿನಲ್ಲಿದ್ದವರು ಹೊರಗೆ ಬಿದ್ದಿರಬೇಕು ಎನ್ನಲಾಗಿದೆ. ವಿಟ್ಲ ಮೂಲದ ಧನುಷ್ ಎಂಬ ಹೆಸರಿನ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಮಾಹಿತಿ ಪತ್ತೆಯಾಗಿಲ್ಲ.
- Advertisement -