ಬೆಳ್ತಂಗಡಿ: ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದಿಂದ ಟ್ರೆಕ್ಕಿಂಗ್ ಗೈಡ್ ತರಬೇತಿ ಕಾರ್ಯಕ್ರಮ ಜೂ.17 ಮತ್ತು 18 ರಂದು ಕುದುರೆಮುಖ ಪದ್ಮಾವತಿ ದೇವಸ್ಥಾನದ ಹಾಲ್ ನಲ್ಲಿ ನಡೆಯಿತು.ಗೈಡ್ ಗಳ ಸಂವಹನ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು ತರಬೇತಿಯು ಮುಖ್ಯ ಉದ್ದೇಶವಾಗಿತ್ತು. ತರಬೇತಿಯಲ್ಲಿ ಕುದುರೆಮುಖದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ವಿವರಿಸುವ ಕೌಶಲ್ಯ ಅಭಿವೃದ್ಧಿ ಪಡಿಸಲಾಯಿತು. ತರಬೇತಿ ಕಾರ್ಯಾಗಾರಕ್ಕೆ ಹಾಜರಾದ ಗೈಡ್ ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಬಂಡೀಪುರದ ಸಂಪನ್ಮೂಲ ವ್ಯಕ್ತಿಯಾಗಿ ರೋನಿತ್ ನಂಜಪ್ಪ ಮಾಹಿತಿ ನೀಡಿದರು. ಟ್ರೆಕ್ಕಿಂಗ್ ಗೈಡ್ ಗಳ ಸಂವಹನ ಕೌಶಲ್ಯ ಹಾಗೂ ರಾಷ್ಟ್ರೀಯ ಉದ್ಯಮನದ ಕುದುರೆಮುಖದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಬಳಿಕ ಪ್ರಮಾಣ ಪತ್ರ ನೀಡಲಾಯಿತು. ಜೂ. 24 ಮತ್ತು 25 ರಂದು ಟ್ರೆಕ್ಕಿಂಗ್ ಗೈಡ್ ಗಳ ತರಬೇತಿ ಕಾರ್ಯ ನಡೆಯಲಿದೆ.
ಈ ಸಂದರ್ಭದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಂ ಬಾಬು ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್, ಬೆಳ್ತಂಗಡಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ವಿ. ಶರ್ಮಿಷ್ಮಾ, ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಚೇತನ್ ಕುಮಾರ್ ಮತ್ತು ಕಾರ್ಕಳ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಶಿಧರ್ ಪಾಟೀಲ್ ಉಪಸ್ಥಿತರಿದ್ದರು.