- Advertisement -
- Advertisement -
ಬೆಳ್ತಂಗಡಿ: ಒಂಟಿಸಲಗವೊಂದು ಮರ ದೂಡಿ ಹಾಕಿದ ಪರಿಣಾಮ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ಚಾರ್ಮಾಡಿ ಘಾಟ್ ರಸ್ತೆಯ ಸಮೀಪ ಏ 27 ರ ಮಧ್ಯ ರಾತ್ರಿ ನಡೆದಿದೆ.
ಚಾರ್ಮಾಡಿ ರಸ್ತೆಯ ಮಠದಮಜಲು ಎಂಬಲ್ಲಿ ಈಂದ್ ಮರವನ್ನು ಆನೆ ದೂಡಿ ಹಾಕಿದೆ ಈ ವೇಳೆ ಅದರ ಪಕ್ಕದಲ್ಲೇ ಹಾದು ಹೋಗಿದ್ದ 33 ಕೆ.ವಿ. ತ್ರಿನೇತ್ರ ಲೈನ್ ಮತ್ತು ಚಾರ್ಮಾಡಿ ಫೀಡರ್ ನ 11 ಕೆ. ವಿ. ಗೆ ಬಿದ್ದ ಪರಿಣಾಮ ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾಗಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಸರಿ ಪಡಿಸಲು ಕ್ರಮ ಕೈಗೊಂಡಿದ್ದಾರೆ.
- Advertisement -