ಬೆಂಗಳೂರು; ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಲ್ ಗೂ ವಿದಾಯ ಹೇಳ್ತಾರಾ ಅನ್ನೋ ಅನುಮಾನ ಇದೀಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಧೋನಿ ಶೇರ್ ಮಾಡಿದ್ದಾರೆ.
ಇಂದು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಠಾತ್ ಪೋಸ್ಟ್ ಮಾಡಿರುವ ಧೋನಿ, ಅಭಿಮಾನಿಗಳ ಆತಂಕ ಮತ್ತು ಊಹಾಪೋಹಗಳಿಗೆ ಕಾರಣರಾಗಿದ್ದಾರೆ. ಅಷ್ಟಕ್ಕೂ ಧೋನಿ ಮಾಡಿರುವ ಪೋಸ್ಟ್ನಲ್ಲಿರುವುದೆನೆಂದರೆ, ಕ್ಯಾಪ್ಟನ್ ಕೂಲ್, ಸೆಪ್ಟೆಂಬರ್ 25 ಅಂದರೆ ಭಾನುವಾರದಂದು ಫೇಸ್ಬುಕ್ನಲ್ಲಿ ಲೈವ್ ಬರುವುದಾಗಿ ಹೇಳಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ, ಮಧ್ಯಾಹ್ನ 2 ಗಂಟೆಗೆ ನಾನು ಲೈವ್ ಬರಲಿದ್ದು, ಅದರಲ್ಲಿ ನಾನು ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಧೋನಿಯ ಈ ಹೇಳಿಕೆಯೆ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಧೋನಿ ಈ ಫೇಸ್ಬುಕ್ ಪೋಸ್ಟ್ ನೋಡಿರುವ ಅಭಿಮಾನಿಗಳಲ್ಲಿ ಮಹೀ ನಾಳೆ ಏನನ್ನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಲ್ಲದೆ ಧೋನಿ ಈಗಾಗಲೇ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದು, ನಾಳಿನ ಫೇಸ್ಬುಕ್ ಲೈವ್ನಲ್ಲಿ ಮತ್ತ್ಯಾವ ಬಾಂಬ್ ಸಿಡಿಸುತ್ತಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನಸಲ್ಲಿ ಮೂಡಿದೆ. ಅಲ್ಲದೆ ಧೋನಿ ಐಪಿಎಲ್ನಿಂದ ನಿವೃತ್ತಿ ಘೋಷಿಸಲಿದ್ದಾರಾ ಎಂಬ ಆತಂಕವೂ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ. ಧೋನಿ ಏನನ್ನು ಹೇಳುತ್ತಾರೆ ಹಾಗೂ ಯಾವುದರ ಬಗ್ಗೆ ಮಾತನಾಡುತ್ತಾರೆ ಎಂಬುದು ಭಾನುವಾರ 2 ಗಂಟೆಗಷ್ಟೇ ಗೊತ್ತಾಗಲಿದೆ. ಆದರೆ, ಕಳೆದ ಬಾರಿ ಭರವಸೆ ನೀಡಿದಂತೆ ಚೆನ್ನೈನಿಂದಲೇ ಧೋನಿ ಐಪಿಎಲ್ನಿಂದ ನಿವೃತ್ತಿಯಾಗುವುದು ಖಚಿತವಾಗಿದೆ.