- Advertisement -
- Advertisement -
ಬಂಟ್ವಾಳ: 25 ರಂದು ನಡೆಯುವ ದೈವಗಳ ಕಾಲಾವಧಿ ನೇಮಗಳಿಗೆ ಇಂದು ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಬಾಲಮಂಟಮೆಯಲ್ಲಿ ಗೂನೆಮುಹೂರ್ತ ನಡೆಯಿತು.
ಡಿ.25 ರಂದು ಕಟ್ಟುಕಟ್ಟಲೆಯಂತೆ ಅರಸು ಗುಡ್ಡೆಚಾಮುಂಡಿ, ಪ್ರಧಾನಿಶ್ರೀ ಪಂಜುರ್ಲಿ, ಬಂಟೆದಿ ಶ್ರೀಮಲೆಕೊರತಿ ದೈವಗಳಿಗೆ ಕಾಲಾವಧಿ ನೇಮ ನಡೆಯಲಿದೆ.
ಅದೇ ದಿನ ಬೆಳಿಗ್ಗೆ ಮಾಣಿ ಗುತ್ತುವಿನಿಂದ ದೈವಗಳ ಭಂಡಾರ ಹೊರಟು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ನಿಯಮದಂತೆ ನೇಮ ನಡೆಯುತ್ತದೆ. ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿಲಾಗಿದೆ.
- Advertisement -