Sunday, May 19, 2024
Homeಕರಾವಳಿಬಂಟ್ವಾಳ: ಹೂವಿನ ವ್ಯಾಪಾರಿಗೆ ಬೆದರಿಕೆ; ಸಾವಿರಾರು ರೂಪಾಯಿ ಮೌಲ್ಯದ ಹೂವುಗಳನ್ನು ಕಸಿದು ಪರಾರಿ!

ಬಂಟ್ವಾಳ: ಹೂವಿನ ವ್ಯಾಪಾರಿಗೆ ಬೆದರಿಕೆ; ಸಾವಿರಾರು ರೂಪಾಯಿ ಮೌಲ್ಯದ ಹೂವುಗಳನ್ನು ಕಸಿದು ಪರಾರಿ!

spot_img
- Advertisement -
- Advertisement -

ಬಂಟ್ವಾಳ: ಹೂವಿನ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ ಸಾವಿರಾರು ರೂಪಾಯಿ ಮೌಲ್ಯದ ಹೂವುಗಳನ್ನು ಕಸಿದುಕೊಂಡು ಹೋದ ಘಟನೆ ಬಿ.ಸಿ.ರೋಡಿನ ಮುಖ್ಯ ವೃತ್ತದಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.

ಕುಶಾಲನಗರ ಮೂಲದ ಅಭಿಲಾಷ್ ಎನ್ನುವವರು ನವರಾತ್ರಿ ಹಬ್ಬಕ್ಕೆಂದು ರೈತರಿಂದ ನೇರವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಬಿಸಿರೋಡಿಗೆ ಆಗಮಿಸಿದ್ದು ಇಲ್ಲಿನ ಮುಖ್ಯ ವೃತ್ತದ ರಸ್ತೆ ಬದಿಯಲ್ಲಿ ರಿಕ್ಷಾದಲ್ಲಿ ಹೂ ವ್ಯಾಪಾರ ಮಾಡುತ್ತಿದ್ದರು.

ಆದರೆ ಇವರು ವ್ಯಾಪಾರ ಮಾಡುವುದನ್ನು ಹಲವರು ವಿರೋಧ ವ್ಯಕಪಡಿಸಿದ್ದರು ಎಂದು ಆರೋಪ ಮಾಡಿದ್ದಾರೆ. ರಾತ್ರಿ ವೇಳೆ ಕಾರಿನಲ್ಲಿ ಬಂದ ತಂಡವೊಂದು ಅವ್ಯಾಚ್ಚವಾಗಿ ಬೈದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಆ ಬಳಿಕ ಬೈಕಿನಲ್ಲಿ ಬಂದ ತಂಡವೊಂದು 4 ಸಾವಿರಕ್ಕೂ ಹೆಚ್ಚು ಬೆಲೆಯ ಹೂವುಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!