- Advertisement -
- Advertisement -
ನವದೆಹಲಿ:ಈ ಬಾರಿಯು ಕೇಂದ್ರ ಬಜೆಟ್ ಅನ್ನು ಹಿಂದೆಂದಿಗಿಂತಲೂ ಸಂಪೂರ್ಣವಾಗಿ ವಿಭಿನ್ನವಾದ ರೀತಿಯಲ್ಲಿ ಮಂಡನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು. ಸಿಐಐ ಪಾಲುದಾರಿಕೆ ಶೃಂಗಸಭೆ 2020 ರಲ್ಲಿ ಮಾತನಾಡಿದ ಸೀತಾರಾಮನ್, ಭಾರತ ನೂರು ವರ್ಷಗಳಲ್ಲಿ ಸಾಂಕ್ರಾಮಿಕ ರೋಗದ ಬಾದೆಯ ನಂತರ ಬಜೆಟ್ ಸಿದ್ಧವಾಗಿದ್ದು ಜನರಿಗೆ ನೆಮ್ಮದಿ ತರಲಿದೆ ಎಂದರು.
ಅಲ್ಲದೆ ನಾಗರಿಕರ ಸಲಹೆ, ಸೂಚನೆಗಳನ್ನು ನಮಗೆ ಕಳುಹಿಸಿಕೊಡಿ ಎಂದು ದೇಶದ ಜನತೆಯಲ್ಲಿ ಅವರು ಮನವಿ ಮಾಡಿ ನಿಮ್ಮ ಸಲಹೆ, ಸೂಚನೆಗಳನ್ನು ಪಡೆಯದ ಹೊರತು ನಾವು ಬಜೆಟ್ ಅನ್ನು ಮಂಡನೆ ಮಾಡಲು ಸಾಧ್ಯವಾಗದು ಎಂದರು.2021-22ರ ಕೇಂದ್ರ ಜೆಟ್ ಅನ್ನು 2021ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಅವರು ಈ ವೇಳೆ ಹಂಚಿಕೊಂಡರು.
- Advertisement -