Wednesday, April 24, 2024
Homeಜ್ಯೋತಿಷ್ಯಪ್ರತಿಯೊಂದು ಕಷ್ಟವನ್ನು ದೂರ ಮಾಡುತ್ತೆ ಈ ಮಂತ್ರ

ಪ್ರತಿಯೊಂದು ಕಷ್ಟವನ್ನು ದೂರ ಮಾಡುತ್ತೆ ಈ ಮಂತ್ರ

spot_img
- Advertisement -
- Advertisement -

ಹಿಂದೂ ಧರ್ಮದಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಅಕಾಲಿಕ ಮರಣವನ್ನು ತಡೆಯಬಹುದು. ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಈ ಮಂತ್ರಕ್ಕಿದೆ.

ಸ್ನಾನ ಮಾಡುವಾಗ ದೇಹಕ್ಕೆ ನೀರು ಸುರಿಯುವ ವೇಳೆ ಮಹಾ ಮೃತ್ಯಂಜಯ ಮಂತ್ರವನ್ನು ಜಪಿಸಬೇಕು. ಇದ್ರಿಂದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಧರ್ಮಗ್ರಂಥಗಳ ಪ್ರಕಾರ ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಈ ಮಂತ್ರವನ್ನು ಪ್ರತಿ ದಿನ ಪಠಿಸಬೇಕು.

108 ಬಾರಿ ಪಠಿಸಲು ಸಾಧ್ಯವಿಲ್ಲ ಎನ್ನುವವರು ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರು ಅರ್ಪಿಸುತ್ತ ಈ ಮಂತ್ರವನ್ನು ಜಪಿಸಬೇಕು. ಬಿಲ್ವಪತ್ರೆಯನ್ನು ಅರ್ಪಿಸಿ ಪೂಜೆ ಮಾಡಬೇಕು. ಇದನ್ನು 15 ದಿನಗಳ ಕಾಲ ಮಾಡುವುದ್ರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಸುಖ, ಶಾಂತಿ, ಸಮೃದ್ಧಿ ಇದ್ರಿಂದ ಪ್ರಾಪ್ತಿಯಾಗುತ್ತೆ. ಈ ಮಂತ್ರ ಪಠಿಸುವುದ್ರಿಂದ ದೇಹಕ್ಕೆ ಹೊಸ ಶಕ್ತಿ ಸಿಕ್ಕು ಕಾಯಿಲೆಯಿಂದ ಬೇಗ ಚೇತರಿಸಿಕೊಳ್ಳಬಹುದು.

- Advertisement -
spot_img

Latest News

error: Content is protected !!