- Advertisement -
- Advertisement -
ಕಾರ್ಕಳ: ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸ್ವಕ್ಷೇತ್ರದಲ್ಲೇ ಕಳೆದ 4 ತಿಂಗಳಿಂದ PDO ಇಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಪಂಚಾಯತ್ ಬಗ್ಗೆ ಸಚಿವರ ನಿರ್ಲಕ್ಷ್ಯ ಮತ್ತು ಸ್ಥಳೀಯರು ಮನವಿ ನೀಡಿದ್ದರೂ ಸ್ಪಂದಿಸದ EO ವಿರುದ್ಧ ಕಾರ್ಕಳ ತಾಲೂಕಿನಲ್ಲಿ ಇವತ್ತು ಪ್ರತಿಭಟನೆ ನಡೆಯಿತು.
ಕಾರ್ಕಳ ತಾಲೂಕಿನ ಈದು ಪಂಚಾಯತ್ ಮುಂದೆ ಆಡಳಿತ ಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ತಕ್ಷಣ ಈದು ಗ್ರಾಮಕ್ಕೆ ಪಿಡಿಓ ಕರೆಸಿಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಈ ಸಂದರ್ಭ ಆಗ್ರಹಿಸಿದರು.
- Advertisement -