ಬಂಟ್ವಾಳ: ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಅಸ್ಸಾಂ ನ ಹೋಜೈ ತಾಲೂಕಿನ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿ. ಆರೋಪಿ ಪುದು ಗ್ರಾಮದ ಅಮ್ಮೆಮ್ಮಾರ್ ನಿವಾಸಿ ಸಿವಿಲ್ ಎಂಜಿನಿಯರ್ ಹಮ್ಮಬ್ಬ ಮರ್ಜೂಕ್ ಅವರ ಜತೆ ಕೆಲಸ ಮಾಡುತ್ತಿದ್ದ .. ಹಮ್ಮಬ್ಬ ಅವರು ಬಿಲ್ಡಿಂಗ್ ಕೆಲಸಕ್ಕೆ ಉಪಯೋಗಿಸುತ್ತಿದ್ದ ಕಬ್ಬಿಣದ ಶೀಟು, ಜಾಕ್, ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ಅವರ ಮನೆಯ ಪಕ್ಕದ ಶೆಡ್ನಲ್ಲಿ ಇಡುತ್ತಿದ್ದರು. ನ. 24ರಂದು ಅವರು ಬೆಂಗಳೂರಿಗೆ ಹೋಗಿ ಅವರು ನವೆಂಬರ್ 27ಕ್ಕೆ ಮರಳಿದ್ದರು. ನ. 29ರಂದು ಶೆಡ್ಗೆ ಹೋಗಿ ನೋಡಿದಾಗ ಸೊತ್ತುಗಳು ನಾಪತ್ತೆಯಾಗಿದ್ದವು. ವಿಚಾರಿಸಿದಾಗ ಆರೋಪಿ ಶರೂಪ್ ಆಲಂ ಟಾಟಾ ಏಸ್ ವಾಹನದ ಮೂಲಕ ಸೊತ್ತುಗಳನ್ನು ಸಾಗಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿ ಮೊಹಮ್ಮದ್ ಶರೂಫ್ ಆಲಂ ಎಂಬಾತನನ್ನು ಡಿ.14 ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಹಾಗೂ ಪೊಲೀಸ್ ಉಪ ನಿರೀಕ್ಷಕರು ಹರೀಶ್ ಎಂ ಆರ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರು ಮೂರ್ತಿ ಹಾಗೂ ಸಿಬ್ಬಂದಿಯಾದ ಹೆಚ್ ಸಿ ಸುರೇಶ್, ಕೃಷ್ಣ ಪಿಸಿ ಗಳಾದ ಪುನೀತ್, ನಾಗನಾಥ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ