Thursday, June 26, 2025
Homeಕರಾವಳಿಮೀನುಗಾರಿಕೆಗೆ ತೆರಳಿದ್ದ ಮೂವರು ಸಮುದ್ರಪಾಲು; ಓರ್ವನ ರಕ್ಷಣೆ ಇಬ್ಬರು ಮೃತ್ಯು

ಮೀನುಗಾರಿಕೆಗೆ ತೆರಳಿದ್ದ ಮೂವರು ಸಮುದ್ರಪಾಲು; ಓರ್ವನ ರಕ್ಷಣೆ ಇಬ್ಬರು ಮೃತ್ಯು

spot_img
- Advertisement -
- Advertisement -

ಪಡುಬಿದ್ರಿ: ಹೆಜಮಾಡಿ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಇಳಿದಿದ್ದ ಮೂವರಲ್ಲಿ, ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಡಿ.30 ಸೋಮವಾರದಂದು ನಡೆದಿದೆ.   

ಮೃತರನ್ನು ಅಮನ್(19) ಹಾಗೂ ಅಕ್ಷಯ್(19) ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿ ಪವನ್ ನನ್ನು ರಕ್ಷಿಸಲಾಗಿದೆ.  ಇಂದು ಎಳ್ಳಮಾವಾಸ್ಯೆ ಆಗಿದ್ದ ಕಾರಣ ಸಮುದ್ರ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಮುದ್ರಪಾಲಾದ ಮೂವರಲ್ಲಿ ಒಬ್ಬನನ್ನು ರಕ್ಷಿಸಲಾಗಿದೆ. 

ಅಮನ್, ಅಕ್ಷಯ್ ಹಾಗೂ ಪವನ್ ಮೂವರು ಸೇರಿ ಮೀನುಗಾರಿಗೆ ತೆರಳಿದ್ದರು. ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!