Friday, May 3, 2024
Homeಕರಾವಳಿಕಾಂತಾರ ನೋಡಿ ಬೆಂಗಳೂರಿನಲ್ಲಿ ಕೊರಗಜ್ಜ ನೇಮ ಮಾಡಲು ನಿರ್ಧರಿಸಿದ್ದ ತಂಡ: ತುಳುನಾಡಿನ ಜನರ ವಿರೋಧದ ಹಿನ್ನೆಲೆ...

ಕಾಂತಾರ ನೋಡಿ ಬೆಂಗಳೂರಿನಲ್ಲಿ ಕೊರಗಜ್ಜ ನೇಮ ಮಾಡಲು ನಿರ್ಧರಿಸಿದ್ದ ತಂಡ: ತುಳುನಾಡಿನ ಜನರ ವಿರೋಧದ ಹಿನ್ನೆಲೆ ರದ್ದು

spot_img
- Advertisement -
- Advertisement -

ಬೆಂಗಳೂರು: ಕಾಂತಾರ ಸಿನಿಮಾದಿಂದ ಆಕರ್ಷಿತರಾಗಿ ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ ಆಚರಣೆ ಮಾಡಲು ಪ್ಲ್ಯಾನ್ ಮಾಡಿದ್ದು ಇದೀಗ ತುಳು ನಾಡಿನವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ರದ್ದು ಮಾಡಲಾಗಿದೆ.

ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು ನಾಡಿನ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ ನೇಮ ಕ್ಯಾನ್ಸಲ್ ಮಾಡಲಾಗಿದೆ.

- Advertisement -
spot_img

Latest News

error: Content is protected !!