- Advertisement -
- Advertisement -
ಕಾಸರಗೋಡು: ಪತ್ನಿಯನ್ನು ಕೊಲೆಗೈಯಲು ಯತ್ನಿಸಿದ ಪತಿ ಅರೆಸ್ಟ್ ಆಗಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬೇಳ ಕುಂಜಾರು ನಿವಾಸಿ ಕೆ.ಎ. ಖೈರುನ್ನೀಸ (37) ಅವರಿಗೆ ಅವರ ಪತಿ ಅಬ್ದುಲ್ ರಹ್ಮಾನ್ ಹಲ್ಲೆಗೈದು ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಬ್ದುಲ್ ರಹ್ಮಾನ್ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕಳೆದ ಬುಧವಾರ ಮುಂಜಾನೆ 2 ಗಂಟೆಗೆ ಕೊಲೆಗೈಯ್ಯಲು ಯತ್ನಿಸಿದ್ದಾಗಿ ನೀಡಿದ ದೂರಿನಂತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದೆ ಎನ್ನಲಾಗಿದೆ.
- Advertisement -